ರೈತರ ಡೈರಿ- ಶ್ರೀಮತಿ ಚಂಡಿ ಬಾಯಿ ಅವರ ಸ್ಪೂರ್ತಿದಾಯಕ ಪಯಣ
ಚಂಡಿ ಬಾಯಿ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಮಂಡಲದ ಅರ್ಜುನ್ ನಾಯಕ್ ತಾಂಡಾ ಎಂಬ ಹಳ್ಳಿಯಿಂದ ಬಂದವರು. ಇದು ಬಂಜರು ಭೂಮಿಯಾಗಿದ್ದು, ಇಲ್ಲಿ ಕೃಷಿ ಮಾಡುವುದು ಸವಾಲಿನ ಸಂಗತಿ. ಅವರು 3 ಗಂಡು ಮಕ್ಕಳು, 3 ಸೊಸೆಯಂದಿರು ಮತ್ತು 6 ಮೊಮ್ಮಕ್ಕಳು ಸೇರಿದಂತೆ 13 ಸದಸ್ಯರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಕೃಷಿಯೇ ಅವರ ಕುಟುಂಬದ ಪ್ರಮುಖ ಜೀವನಾಧಾರ. ಚಂಡಿ ಬಾಯಿ 5 ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ಅವರು ಮುಖ್ಯವಾಗಿ ಖಾರಿಫ್ ಋತುವಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಚಂಡಿ ಬಾಯಿ ಖಾಸಗಿ ವ್ಯಾಪಾರಿಗಳಿಂದ ಬೀಜಗಳನ್ನು ಸಂಗ್ರಹಿಸಿ ಸೋಯಾಬೀನ್ ಮತ್ತು ಮೆಕ್ಕೆಜೋಳ ಈ ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು. ವ್ಯಾಪಾರಿಗಳಿಂದ ಶೇ. 3% ಬಡ್ಡಿದರದಲ್ಲಿ ರೂ. 20,000 ಸಾಲ ಪಡೆದು ಜಹೀರಾಬಾದ್ನಿಂದ ಹೈಬ್ರಿಡ್ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಖರೀದಿಸಿದರು.



