ಪರಿಸರವನ್ನು ಪೋಷಿಸುವುದು

Recent Posts

ರೈತರ ಡೈರಿ- ಶ್ರೀಮತಿ ಚಂಡಿ ಬಾಯಿ ಅವರ ಸ್ಪೂರ್ತಿದಾಯಕ ಪಯಣ

ರೈತರ ಡೈರಿ- ಶ್ರೀಮತಿ ಚಂಡಿ ಬಾಯಿ ಅವರ ಸ್ಪೂರ್ತಿದಾಯಕ ಪಯಣ

ಚಂಡಿ ಬಾಯಿ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಮಂಡಲದ ಅರ್ಜುನ್ ನಾಯಕ್ ತಾಂಡಾ ಎಂಬ ಹಳ್ಳಿಯಿಂದ ಬಂದವರು. ಇದು ಬಂಜರು ಭೂಮಿಯಾಗಿದ್ದು, ಇಲ್ಲಿ ಕೃಷಿ ಮಾಡುವುದು ಸವಾಲಿನ ಸಂಗತಿ. ಅವರು 3 ಗಂಡು ಮಕ್ಕಳು, 3 ಸೊಸೆಯಂದಿರು ಮತ್ತು 6 ಮೊಮ್ಮಕ್ಕಳು ಸೇರಿದಂತೆ 13 ಸದಸ್ಯರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಕೃಷಿಯೇ ಅವರ ಕುಟುಂಬದ ಪ್ರಮುಖ ಜೀವನಾಧಾರ. ಚಂಡಿ ಬಾಯಿ 5 ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ಅವರು ಮುಖ್ಯವಾಗಿ ಖಾರಿಫ್ ಋತುವಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಚಂಡಿ ಬಾಯಿ ಖಾಸಗಿ ವ್ಯಾಪಾರಿಗಳಿಂದ ಬೀಜಗಳನ್ನು ಸಂಗ್ರಹಿಸಿ ಸೋಯಾಬೀನ್ ಮತ್ತು ಮೆಕ್ಕೆಜೋಳ ಈ ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು. ವ್ಯಾಪಾರಿಗಳಿಂದ ಶೇ. 3% ಬಡ್ಡಿದರದಲ್ಲಿ ರೂ. 20,000 ಸಾಲ ಪಡೆದು ಜಹೀರಾಬಾದ್‌ನಿಂದ ಹೈಬ್ರಿಡ್ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಖರೀದಿಸಿದರು.

ಬೀಬಿ ಫಾತಿಮಾ ಅವರ ಯಶೋಗಾಥೆ

ಬೀಬಿ ಫಾತಿಮಾ ಅವರ ಯಶೋಗಾಥೆ

ಮಹಿಳಾ ಸಬಲೀಕರಣ ಎಂದರೆ ಮುಖ್ಯವಾಗಿ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಹಿಂದುಳಿದ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನವನ್ನು...